ನಿರಾಶಿತೆ

ಕರ್ತವ್ಯದ ನೆಪದಲ್ಲಿ
ಅತ್ಯಾಚಾರ ಮಾಡುವ ಹೆತ್ತವರು
ಕತ್ತೆಯೊಂದಕ್ಕೆ ಗಂಟು ಹಾಕಿದರೂ
ಏನು ಮಾಡುವುದು ಹಣೆ ಬರಹವೆಂಬ
ತಲೆ ಬುಡವೇ ಇಲ್ಲದ ಬುದ್ಧಿಗೇಡಿ ತತ್ವಕ್ಕೆ ಶರಣಾಗದೆ
ನಿಷ್ಠೆ, ಒಳ್ಳೆತನದ ಸೋಗು ಹಾಕಿ
ಬೆಂಕಿ ಬಿದ್ದ ಹತ್ತಿಯಂತೆ ಹಾಳಾಗಲೊಲ್ಲದೆ
ಪ್ರೇತ ಬದುಕಿಗೆ ತಲೆ ಕೊಡದೆ
ಹಿತ ಶತ್ರುಗಳ ಪಂಜರದಿಂದ ಪಾರಾಗಿ ಒಲುಮೆಯ ಬದುಕನರಸಿ
ಹೊರ ಹೊರಟೆ.

ಬೆಳದಿಂಗಳಲ್ಲಿ ಉಂಡು
ಸವಿಯಾದ ತಾಂಬೂಲ ತಿಂದು
ಕೆಂಪು ತುಟಿಗಳ ಸ್ಪರ್ಧೆ ನಡೆಸಿದೆವು ಸುಖದ ಬಿಸಿಯನ್ನು ಸವಿದೆವು :
ಇರುಳು ಹಗಲುಗಳ ಉದ್ದ ಗಾತ್ರಗಳನಳೆದೆವು

ಕುಣಿ ಕುಣಿಯುತ್ತ ಬಂತು ಬೇಸಿಗೆ
ನೀರು ನೆರಳನ್ನು ಹಾರೈಸಿ
ಅತ್ತಿತ್ತ ನೋಡಿದರೆ
ಊರು ತುಂಬಾ ಬರಿ ಜಾಲಿ, ಬ್ಯಾಲ
ಬೇಲಿಯೊಳಗೆ ಭದ್ರವಾಗಿರುವ ತೋಟ ತುಡಿಕೆಗಳು
ಮುಕ್ತ ಆಶ್ರಯ ತಾಣ ಒಂದೂ ಕಂಡು ಬರಲಿಲ್ಲ.

ಕೆಟ್ಟ ಕೆಟ್ಟ ಕನಸುಗಳು ಬೀಳಲಾರಂಭಿಸಿ
ಭಯವಾಗಿ ನಡುಕ ಗದಗುಡಿಸ ತೊಡಗಿತು.
ಪಾಪ ಪ್ರಜ್ಞೆಯ ಭೂತ ನೃತ್ಯವು ಸಾಗಿ
ಬಾರಿ ಬಾರಿಗೂ ತಪ್ಪಾಯಿತೆನಿಸಿತು
ಮನಸು ‘ತಬ್ಬಲಿ’ ‘ತಬ್ಬಲಿ’ ಯೆಂದು ಚೀರ ತೊಡಗಿತು.

ಅನ್ನ ವಿಷವಾಯಿತು
ಬದುಕು ನಿಸ್ಸಾರವಾಯಿತು
ಅಂಗಿದ್ದರೇನು? ಇಂಗಿದ್ದರೇನು?
ಹ್ಯಾಗಿದ್ದರೇನು?
ಕರೆವವರೆ? ಕಳುವವರೆ?
ನೋಡುವವರೆ? ನಲಿವವರೆ?
ನಮಗೆ ಯಾರಿದ್ದಾರೆ?
‘ಇದೊಂದು ಜೀವನಾನ?’ ಎನ್ನಿಸಿ
ಆಸೆಯೇ ಇಮರಿ ಹೋಯಿತು.

ಅನ್ನೋ ಹಾಗಿಲ್ಲ ಅನುಭವಿಸೋ ಹಾಗಿಲ್ಲ
ಬನ್ನ ಬವಣೆ ಅಂತಗೊಣಗುವಂತಿಲ್ಲ
ಚೆನ್ನಿಗ ನನ್ನವನಿಗೂ ಹೀಗೆ ಅನ್ನಿಸುತ್ತಿರಬೇಕು ಎಲ್ಲಾ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾಣೆಯಾಗಿದೆ ಬಾಲ್ಯ
Next post ಕಣ್ಮರೆ

ಸಣ್ಣ ಕತೆ

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

cheap jordans|wholesale air max|wholesale jordans|wholesale jewelry|wholesale jerseys